Skip to content Skip to footer

ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಸಾಧನೆಗೈದ ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸನಿವಾಸ ಪದವಿಪೂರ್ವ ಕಾಲೇಜು (SDM Residential PU College, Ujire) ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವು ಕಾಲೇಜಿನಲ್ಲಿ ಇಂದು (ಎ. 17) ನಡೆಯಿತು.

ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಸೋನಿಯಾ ಯಶೋವರ್ಮ ಅವರು, ಏಕಾಗ್ರತೆಯಿಂದ ಕೂಡಿದ ಕಲಿಕೆ ಸಾಧನೆಗೆ ದಾರಿ ಮಾಡಿಕೊಡುವುದು. ಅದಕ್ಕೆ ವಿದ್ಯಾರ್ಥಿಗಳು ಪಡೆದ ಅಂಕಗಳೇ ಸಾಕ್ಷಿ. ಕಾಲೇಜಿನಲ್ಲಿ ನಿರಂತರವಾಗಿ ಸಿಕ್ಕಿರುವ ಮಾರ್ಗದರ್ಶನದ ಮೂಲಕ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದು, ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಯಲ್ಲೂ ಇನ್ನಷ್ಟು ಸಾಧನೆ ಹೊರಹೊಮ್ಮುವಂತಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್ ಮಾತನಾಡಿ, “ಅತ್ಯುತ್ತಮ ಅಂಕಗಳ ಸಾಧನೆಗೆ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಟ್ಟಿದ್ದಾರೆ. ಉಪನ್ಯಾಸಕ ವೃಂದವೂ ಶ್ರಮಿಸಿದೆ. ಎಲ್ಲರ ನಿಷ್ಠೆಗೆ ಭಗವಂತನ ಆಶೀರ್ವಾದವೂ ದೊರೆತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಉತ್ತಮಿಕೆ ಕಾಯ್ದುಕೊಳ್ಳುವಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾಗಿ” ಎಂದರು.

ಉಪ ಪ್ರಾಂಶುಪಾಲ ಮನೀಷ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗಣಿತಶಾಸ್ತ್ರ ಉಪನ್ಯಾಸಕ ಕೃಷ್ಣಪ್ರಸಾದ್ ಸಾಧಕ ವಿದ್ಯಾರ್ಥಿಗಳ ಮಾಹಿತಿ ವಾಚಿಸಿದರು. ಸಂಸ್ಕೃತ ಉಪನ್ಯಾಸಕ ಮಹೇಶ್ ಎಸ್. ಎಸ್. ವಂದಿಸಿ, ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿಗಳು (ವಿಜ್ಞಾನ ವಿಭಾಗ) ಶೇ. 100 ಫಲಿತಾಂಶ ದಾಖಲಿಸಿದ್ದು, ಧೀಮಂತ್ ಹೆಬ್ಬಾರ್ ರಾಜ್ಯಕ್ಕೆ 7ನೇ ಸ್ಥಾನ ಪಡೆದುಕೊಂಡಿರುತ್ತಾರೆ. ಪರೀಕ್ಷೆ ಎದುರಿಸಿದ 152 ವಿದ್ಯಾರ್ಥಿಗಳಲ್ಲಿ 109 ಉನ್ನತ ದರ್ಜೆ ಹಾಗೂ 43 ಮಂದಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ.

Leave a comment

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ

ಇಲ್ಲಿನ ಎಸ್.ಡಿ.ಎಂ. ಸನಿವಾಸ ಪದವಿಪೂರ್ವ ಕಾಲೇಜು (SDM Residential PU College, Ujire) ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ದಾಖಲಿಸಿದೆ. ಒಟ್ಟು 152 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 109 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 43 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಎಂ. ಧೀಮಂತ ಹೆಬ್ಬಾರ್ 592 (ರಾಜ್ಯಕ್ಕೆ ಏಳನೇ ದರ್ಜೆ), ಹರ್ಷಿತ್ ಎ.ವಿ., ವಿಶ್ವಾಸ್ ನಾಯಕ್ ಡಿ.ಪಿ. ತಲಾ 585, ಸಂಜಯ್ ಪಾಟೀಲ್ ಕೆ.ಎಲ್. 582, ವಿನಯ್ ಸಿ.ಎಂ. 581, ವರುಣ್ ಕುಮಾರ್ ಎಚ್.ಎಲ್. 580, ಚಿರಾಗ್ ಎಸ್. 578, ಪೂರ್ವಿಕ್ ಟಿ.ಎಂ. 577, ಶಾರ್ವಿನ್ 576, ತರುಣ್ ಎಚ್.ಬಿ. 574, ಹೊಯ್ಸಳ್ ರಾಜಕುಮಾರ್ ಪಿ. 573, ಧೀರಜ್ ಸಿ. 573, ಜೀವನ್ ಕೆ.ವಿ. 572, ಕೆ.ಎಂ. ಮನೋಜ್ ಕುಮಾರ್ 572, ಸೃಜಿತ್ ಎಸ್.ಎ. 571, ವಿನಯ್ ಕೆ.ಎಂ. 571, ಬಿಂದು ಮಾಧವ 570 ಅಂಕ ಗಳಿಸಿದ್ದಾರೆ.

Leave a comment

Farewell Ceremony

ಜೀವನವೆಂಬ ಸಾಗರದಲ್ಲಿ ಈಜಲು ಬೇಕಾಗಿರುವುದು ಆತ್ಮವಿಶ್ವಾಸವೆಂಬ ಹರಿಗೋಲು. ಸಂಸ್ಕಾರ, ಆತ್ಮವಿಶ್ವಾಸ, ಮೌಲ್ಯ ಇವು ಮೂರು ಜೀವನವನ್ನು ಸುಂದರ ಗೊಳಿಸುವುದು. ಕೇವಲ ಅಂಕ ಪಡೆಯುವ ಯಂತ್ರಗಳಾಗದೆ ಸಮಾಜವನ್ನು ಮುನ್ನಡೆಸುವ ಶಕ್ತಿಗಳಾಗಿ. ಬದುಕಿನ ಯಾವುದೇ ಸಂದರ್ಭದಲ್ಲೂ ಎದೆಗುಂದದೆ ಮುನ್ನಡೆಯುವ ಕಲೆಯನ್ನು ತಮ್ಮದಾಗಿಸಿಕೊಳ್ಳಿ. ಜೀವನದಲ್ಲಿ ಮುಂಬರುವ ಎಲ್ಲಾ ಸವಾಲುಗಳನ್ನು ಧೈರ್ಯದಿಂದ ಎದುರಿಸುವ ನಿಪುಣತೆ ಚತುರತೆಯನ್ನು ಬೆಳೆಸಿಕೊಳ್ಳಿ. ಹಿರಿಯರು ಭಗವಂತನು ಮೆಚ್ಚುವಂತಹ ಕಾರ್ಯಗಳನ್ನು ಮಾಡಿ, ಸಮಾಜ ಕಟ್ಟುವ ರೂವಾರಿಗಳಾದ ನೀವು ವಿಶ್ಲೇಷಣಾತ್ಮಕ, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ, ಮುಂದಿನ ಭವಿಷ್ಯ ಉಜ್ವಲವಾಗಲಿಯೆಂದರು.

ಪೂಜ್ಯ ಖಾವಂದರನ್ನು ಹಾಗೂ ಮಾತೃಶ್ರಿ ಹೇಮಾವತಿ ಹೆಗ್ಗಡೆಯವರನ್ನು ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಭೇಟಿ ಮಾಡಿ ಆಶೀರ್ವಾದ ಪಡೆದರು, ಎರಡು ವರ್ಷಗಳ ಕಾಲ ಎಸ್.ಡಿ.ಎಮ್. ವಸತಿ ಕಾಲೇಜಿನಲ್ಲಿ ಅತ್ಯುತ್ತಮವಾದ ವ್ಯವಸ್ಥೆ ನಿರ್ಮಾಣ ಮಾಡಿಕೊಟ್ಟ ಪೂಜ್ಯ ಹೆಗ್ಗಡೆ ದಂಪತಿಗಳಿಗೆ ವಿದ್ಯಾರ್ಥಿಗಳು ಕೃತಜ್ಞತೆ ಸಲ್ಲಿಸಿದರು. ಪೂಜ್ಯರ ಭೇಟಿಯ ಜವಾಬ್ದಾರಿ ಹೊತ್ತಿದ್ದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸುನಿಲ್ ಪಂಡಿತ್ ಹಾಗೂ ಉಪ ಪ್ರಾಂಶುಪಾಲರಾದ ಮನೀಶ್ ಕುಮಾರ್ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a comment

ಸಂಭ್ರಮದ ಗಣರಾಜ್ಯೋತ್ಸವ

’75ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳದ ಪಾರುಪತ್ಯಗಾರರಾದ ಶ್ರೀ ಲಕ್ಷ್ಮೀನಾರಾಯಣ ರಾವ್ ಮುಖ್ಯ ಅತಿಥಿಯಾಗಿ ಆಗಮಿಸಿ ಧ್ವಜಾರೋಹಣ ನೆರವೇರಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು. ಧ್ವಜವಂದನೆ ಹಾಗೂ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

Leave a comment

ವಿಶೇಷ ತರಬೇತಿ ಕಾರ್ಯಾಗಾರ

ವಿದ್ಯಾರ್ಥಿಗಳಲ್ಲಿ ಕಲಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವ ಹಾಗೂ ಏಕಾಗ್ರತೆ ,ಆಸಕ್ತಿಯಿಂದ ಕಲಿಕೆಯನ್ನು ಹಿಡಿದಿಡುವ ನಾನ ರೀತಿಯ ತಂತ್ರ ವಿಧಾನಗಳಲ್ಲಿ ನೂತನ ಪರಿಕಲ್ಪನೆಯ ರೂಪದಲ್ಲಿ ಮೂಡಿಬಂದಿರುವ ‘ಇಂಟರ್ ಆಕ್ಟಿವ್ ಡಿಸ್ಪ್ಲೇ ಬೋರ್ಡ್’ ಕುರಿತು ಕಾಲೇಜಿನ ಉಪನ್ಯಾಸಕರಿಗೆ ವಿಶೇಷ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಗಾರದಲ್ಲಿ ‘ಸೆನ್ಸೆಸ್ ಎಲೆಕ್ಟ್ರಾನಿಕ್ಸ್ ಪ್ರಾಡಕ್ಟ್ ‘ನ ತರಬೇತಿದಾರರಾಗಿರುವ ಸುಮಿತ ಇವರು ನೂತನ ತಾಂತ್ರಿಕ ಬೋರ್ಡಿನ ಬಳಕೆಯ ವಿಧಾನಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಕಾಲೇಜಿನಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಳವಡಿಸಿದ ನೂತನ ಎಲೆಕ್ಟ್ರಾನಿಕ್ ಇಂಟರಾಕ್ಟಿವ್ ಡಿಸ್ಪ್ಲೇ ಬೋರ್ಡ್ ಉತ್ತಮ ತಂತ್ರಾಂಶಗಳನ್ನು ಹೊಂದಿದ್ದು ಅತ್ಯಂತ ಸರಳವಾಗಿ ಹಾಗೂ ಆಕರ್ಷಕವಾಗಿ ವಿದ್ಯಾರ್ಥಿಗಳಿಗೆ ಬೋಧಿಸುವ ಎಲ್ಲಾ ಅಂಶಗಳನ್ನು ಒಳಗೊಂಡಿದೆ. ತರಬೇತಿ ಕಾರ್ಯಗಾರದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಹಾಗೂ ಎಲ್ಲಾ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ಗಣಕಶಾಸ್ತ್ರದ ಉಪನ್ಯಾಸಕರಾಗಿರುವ ಪವಿತ್ರ ಕುಮಾರ್ ಸ್ವಾಗತಿಸಿದರು, ಇಂಗ್ಲಿಷ್ ವಿಭಾಗದ ಉಪನ್ಯಾಸಕರಾಗಿರುವ ಪಾರ್ಶ್ವನಾಥ ಹೆಗಡೆ ವಂದಿಸಿದರು.

Leave a comment

ವಾರ್ಷಿಕೋತ್ಸವ ಸಮಾರಂಭ

ನಿರಂತರ ಕಲಿಕೆಯು ಸಮಾಜ ನಮ್ಮನ್ನು ಗುರುತಿಸುವಂತೆ ಮಾಡುವುದು.ವಿಜ್ಞಾನ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರದೊಂದಿಗೆ ಹೊಸ ಹೊಸ ವಿಷಯಗಳ ಕಲಿಕೆಯಲ್ಲಿ ಕುತೂಹಲ ಬೆಳೆಸಿಕೊಂಡಾಗ ವಿಜ್ಞಾನ ಕ್ಷೇತ್ರದಲ್ಲಿ ಬದಲಾವಣೆಗಳ ಜೊತೆಗೆ ಹೊಸ ಕ್ರಾಂತಿಯನ್ನುಂಟು ಮಾಡಲು ಸಾಧ್ಯ. ವೈಯಕ್ತಿಕ ಕುಶಿಗಳನ್ನು ಬದಿಗಿಟ್ಟು ಜ್ಞಾನಾರ್ಜನೆಯಲ್ಲಿ ಮನಸನ್ನು ಕೇಂದ್ರೀಕರಿಸಿ, ಮೊಬೈಲ್ ಬಿಟ್ಟು ಪುಸ್ತಕದ ಗೀಳು ಬೆಳೆಸಿಕೊಳ್ಳಿ, ತಿಳುವಳಿಕೆಯಿಂದ ಕೂಡಿದ ಯುವ ಮನಸ್ಸುಗಳು ದೇಶದ ಆಸ್ತಿಯೆಂದು ಇಸ್ರೋ ಸಂಸ್ಥೆಯಲ್ಲಿ ಹಿರಿಯ ವಿಜ್ಞಾನಿಯಾಗಿರುವ ಶ್ರೀ ಪಣಿಯಾಡಿ ವಾಸುದೇವ ರಾವ್ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಸಂಸ್ಕಾರಯುತ ಸಮಾಜದ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಬಹಳ ಹಿರಿದು, ಓದುಗಾರಿಕೆ, ಸಂಘಟನಾಶಕ್ತಿ, ಪ್ರತಿಭೆ, ಜ್ಞಾನ, ಸಹಕಾರ ಮನೋಭಾವನೆ ನಿಮ್ಮೊಡನೆ ಒಡಮೂಡಿಸಿಕೊಂಡು ಸಮಾಜದಲ್ಲಿ ಉನ್ನತ ಮಟ್ಟಕೇರಿ ಎಂದು ಕಾಲೇಜಿನ ವಾರ್ಷಿಕೋತ್ಸವದ ವೇದಿಕೆಯಲ್ಲಿ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿಯಾಗಿರುವ ಡಾ. ಸತೀಶ್ಚಂದ್ರ .ಎಸ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸುನಿಲ್ ಪಂಡಿತ್ ರವರು ಕಾಲೇಜಿನ ವಾರ್ಷಿಕ ವರದಿಯನ್ನು ವಾಚಿಸಿದರು. ಕಾಲೇಜಿನ ವಿದ್ಯಾರ್ಥಿ ನಾಯಕ ಹರ್ಷಿತ್ ಎ. ವಿ. ಹಾಗೂ ಕಾರ್ಯದರ್ಶಿ ವರುಣ್ ಕುಮಾರ್ ಹೆಚ್.ಎಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಲಿಕೆಯಲ್ಲಿ 2022-23ರ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಸಾಧನೆ ತೋರಿದ್ದ ಹಿರಿಯ ವಿದ್ಯಾರ್ಥಿಗಳನ್ನು ಸನ್ಮಾನಿಲಾಯಿತು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗ್ರಂಥಾಲಯ ಬಳಕೆಯಲ್ಲಿ ಉತ್ತಮಿಕೆ ಮೆರೆದೆ ವಿದ್ಯಾರ್ಥಿಗಳಿಗೆ ‘ವರ್ಷದ ಉತ್ತಮ ಓದುಗ’ ಪ್ರಶಸ್ತಿ ಜೊತೆಗೆ ಕೀರ್ತಿಶೇಷ ಶ್ರೀ ಯಶೋವರ್ಮ ಸ್ಮರಣಾರ್ಥ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆ, ಹಾಗೂ ವಿಜ್ಞಾನ ವಿಭಾಗದಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕಾಲೇಜಿನ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಟಿ. ಕೃಷ್ಣಮೂರ್ತಿ ದಂಪತಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಲಾಯಿತು.

ವಿದ್ಯಾರ್ಥಿಗಳು ವಂದಿಸಿದರು. ಗಣಿತ ವಿಭಾಗದ ಮುಖ್ಯಸ್ಥೆಯಾಗಿರುವ ಶ್ರೀಮತಿ ಧನಲಕ್ಷ್ಮಿ ಸ್ವಾಗತಿಸಿದರು. ಜೀವಶಾಸ್ತ್ರದ ಮುಖ್ಯಸ್ಥೆ ಶ್ರೀಮತಿ ವಾಣಿ.ಎಂ.ಎ. ಹಾಗೂ ಗಣಿತಶಾಸ್ತ್ರ ಉಪನ್ಯಾಸಕಿ ಕು. ಪ್ರಿಯ.ಎಂ.ಹೆಚ್ ನಿರೂಪಿಸಿದರು. ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ಕಾರ್ಯನಿರತ ಕಲಾಸಕ್ತರು,ಉಪನ್ಯಾಸಕರು,ಪ್ರಾಂಶುಪಾಲರು, ವಿದ್ಯಾರ್ಥಿಗಳ ಹೆತ್ತವರು ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳಿಂದ ಅದ್ಧೂರಿ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು

Leave a comment

ಪ್ರಶಸ್ತಿ ವಿತರಣಾ ಸಮಾರಂಭ

ವಿದ್ಯಾರ್ಥಿ ದೆಸೆಯಲ್ಲಿ ವೇದಿಕೆಗಳ ಸದುಪಯೋಗಪಡಿಸಿಕೊಂಡರೆ ಮುಂದಿನ ದಿನಗಳಲ್ಲಿ ವ್ಯಕ್ತಿತ್ವ ನಿರ್ಮಾಣಕ್ಕೆ ಮುಖ್ಯ ರಹದಾರಿಯೂ ಆದಾಗಬಹುದು, ಸೋಲು ಗೆಲುವುಗಳ ಲೆಕ್ಕಾಚಾರಕ್ಕಿಂತ ಭಾಗವಹಿಸುವಿಕೆಯ ಮನಸ್ಥಿತಿ ಆರೋಗ್ಯಕರವೆಂದು , ಎಸ್. ಡಿ. ಎಂ. ಪದವಿ ಕಾಲೇಜಿನ ಸಹ ಪ್ರಾಂಶುಪಾಲರಾದ ಎಸ್. ಏನ್. ಕಾಕತ್ಕರ್ ಹೇಳಿದರು. ಕಾಲೇಜಿನಲ್ಲಿ 2023-24 ರ ಶೈಕ್ಷಣಿಕ ವರ್ಷದಲ್ಲಿ ನಡೆದ ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಪ್ರಶಸ್ತಿ ವಿತರಿಸಿದರು. ಸ್ಪರ್ಧಾತ್ಮಕ ಗುಣಗಳು ಗುರಿ ಮುಟ್ಟಲು ಪ್ರೇರಣೆ ಹಾಗೂ ಕಲಿಕೆಗೂ ಪೂರಕವೆಂದು ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಅವರು ಶುಭಾಶಯಗಳನ್ನು ತಿಳಿಸಿದರು. ವೇದಿಕೆಯಲ್ಲಿ ವಿದ್ಯಾರ್ಥಿ ನಾಯಕನಾದ ಹರ್ಷಿತ್ ಎ. ವಿ. ಕಾರ್ಯದರ್ಶಿ ವರುಣ್ ಕುಮಾರ್ ಹೆಚ್ .ಎಲ್, ಪ್ರಶಸ್ತಿ ನಿರ್ವಹಣಾಧಿಕಾರಿ ಹಾಗೂ ಗಣಕಶಾಸ್ತ್ರ ವಿಭಾಗದ ಉಪನ್ಯಾಸಕರಾಗಿರುವ ಪವಿತ್ರ ಕುಮಾರ್ ಇವರು ಉಪಸ್ಥಿತರಿದ್ದರು.

ಸಾಂಸ್ಕೃತಿಕ ಸ್ಪರ್ಧಾ ಪ್ರಶಸ್ತಿಗಳ ಪಟ್ಟಿಯನ್ನು ಕಾಲೇಜಿನ ಇಂಗ್ಲೀಷ್ ವಿಭಾಗದ ಉಪನ್ಯಾಸಕರು ಹಾಗೂ ಸಾಂಸ್ಕೃತಿಕ ಸಮಿತಿಯ ಸದಸ್ಯರು ಆಗಿರುವ ಪಾರ್ಶ್ವನಾಥ ಹೆಗ್ಡೆ ವಾಚಿಸಿದರು. ಕ್ರೀಡಾ ಸ್ಪರ್ಧಾ ವಿವರಗಳನ್ನು ಕಾಲೇಜಿನ ದೈಹಿಕ ಶಿಕ್ಷಕರಾದ ಲಕ್ಷ್ಮಣ್ ಜಿ. ಡಿ. ವಾಚಿಸಿದರು. ಭೌತಶಾಸ್ತ್ರ ಉಪನ್ಯಾಸಕರಾದ ವಿಕ್ರಂ. ಪಿ ಸ್ವಾಗತಿಸಿದರು. ಸಾಯನ ಶಾಸ್ತ್ರ ಉಪನ್ಯಾಸಕಿ ಚೈತ್ರ ಪ್ರಭು ವಂದಿಸಿದರು. ಇಂಗ್ಲೀಷ್ ವಿಭಾಗ ಮುಖ್ಯಸ್ಥೆ ಭವ್ಯಶ್ರೀಯವರು ನಿರೂಪಿಸಿದರು.

Leave a comment

ಕ್ರೀಡಾಕೂಟದ ಉದ್ಘಾಟನೆ

ಸ್ಪರ್ಧಾಸ್ಪೂರ್ತಿಯ ಹುಮ್ಮಸ್ಸಿನೊಂದಿಗೆ ಸೌಹಾರ್ದತೆ, ಭಾತೃತ್ವ ಭಾವನೆ ಬೆಳೆಸುವುದರೊಂದಿಗೆ ನಮ್ಮ ಮಾನಸಿಕ ದೈಹಿಕ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಕ್ರೀಡೆ ಸಹಕಾರಿಯಾಗಿದೆಯೆಂದು, ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಸ್‌.ಡಿ.ಎಂ. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಪ್ರಮೋದ್ ಕುಮಾರ್ ಜೈನ್ ಕ್ರೀಡಾಕೂಟವನ್ನು ಉದ್ಘಾಟಿಸಿ, ಶುಭಾಶಯವನ್ನು ಕೋರಿದರು.

ಕಾಲೇಜಿನ ಸಂಸ್ಥೆಯ ಹಿರಿಯ ಕ್ಷೇಮಪಾಲನಾ ಅಧಿಕಾರಿಯಾಗಿರುವ ಸೋಮಶೇಖರ್ ಶೆಟ್ಟಿ ಅವರು ಮಾತನಾಡಿ ಸೋಲು ಗೆಲುವುಗಳ ಲೆಕ್ಕಾಚಾರವಿಲ್ಲದೇ ವಿದ್ಯಾರ್ಥಿಗಳು ಸಮಾನಭಾವದೊಂದಿಗೆ ಒಗ್ಗಟ್ಟಿನಿಂದ ಆಡಿಯೆಂದು ಕ್ರೀಡಾಕೂಟಕ್ಕೆ ಶುಭ ಕೋರಿದರು. ಕ್ರೀಡೆ ಕಲಿಕೆಗೆ ಪೂರಕವಾದದ್ದು, ಏಕಾಗ್ರತೆಯೊಂದಿಗೆ ಕಲಿಕೆ ಸಾಧ್ಯವಾಗಲು ಪಠ್ಯದ ಜೊತೆಗೆ ಆಟೋಟಗಳು ಮಹತ್ತರವಾದ ಪಾತ್ರವನ್ನು ವಹಿಸುವುದು. ಎಂದು ಕ್ರೀಡಾಕೂಟದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ನುಡಿದರು. ಕ್ರೀಡಾಕೂಟಕ್ಕೂ ಮೊದಲು ಎಸ್ .ಡಿ .ಎಮ್. ಆಂಗ್ಲ ಮಾಧ್ಯಮ ಶಾಲಾ ಮಕ್ಕಳ ಬ್ಯಾಂಡ್ ಸೆಟ್ ನೊಂದಿಗೆ ನಡೆದ ಪಥಸಂಚಲನ ಗಮನ ಸೆಳೆಯಿತು . ಸುಮಾರು 20ಕ್ಕೂ ಮಿಕ್ಕಿದ ಆಟೋಟ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಸಿಬ್ಬಂದಿಗಳು ಲವಲವಿಕೆಯಿಂದ ಪಾಲ್ಗೊಂಡರು.

ತೀರ್ಪುಗಾರರಾಗಿ ವಿಶ್ವನಾಥ್, ಧರ್ಮೇಂದ್ರ, ಶೀನಪ್ಪ, ಪ್ರಸಾದ್ ಹಾಗೂ ಸಂಸ್ಥೆಯ ದೈಹಿಕ ಶಿಕ್ಷಕರ ತಂಡ ಸಹಕರಿಸಿತು. ವಿಜೇತರಿಗೆ ಪದಕ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌವಿಸಲಾಯಿತು. ಉಪ ಪ್ರಾಂಶುಪಾಲರಾದ ಮನೀಶ್ ಕುಮಾರ್ ಸ್ವಾಗತಿಸಿದರು . ದೈಹಿಕ ಶಿಕ್ಷಕರಾದ ಲಕ್ಷ್ಮಣ್ ಜಿ.ಡಿ ವಂದಿಸಿದರು. ಉಪನ್ಯಾಸಕಿಯರಾದ ಶ್ರೀಮತಿ ಕವಿತಾ ಉಮೇಶ್, ಕುಮಾರಿ ಪ್ರಿಯ ನಿರೂಪಿಸಿದರು.

Leave a comment

‘ವಿಶೇಷ ಉಪನ್ಯಾಸ’ ಕಾರ್ಯಕ್ರಮ

ಸಮುದ್ರದ ನೀರ ರುಚಿಯ ನೋಡಲು ಹೇಗೆ ಸಾಧ್ಯವಿಲ್ಲವೋ,ಹಾಗೇ ಪೂಜ್ಯ ಖಾವಂದರ ಸಾಧನೆಗಳು ಮೊಗೆದಷ್ಟೂ ಮುಗಿಯದಿರುವಂಥದ್ದು. ಆದರ್ಶದ ಪ್ರತಿರೂಪ, ಸಾವಿರಾರು ಜೀವಗಳ ಬಾಳಿನ ಬೆಳಕು, ಸಂಸ್ಕಾರದ ನಡೆ ನುಡಿಯಲ್ಲೇ ಸಾರ್ಥಕತೆ ಕಂಡ ಅಭೂತಪೂರ್ವ ವ್ಯಕ್ತಿತ್ವ. ಇವರ ಜನಪರ ಕಾಳಜಿ ಹಾಗೂ ಸೂಕ್ಷ್ಮಮತೀಯ ಗುಣಗಳು ನಿಜಕ್ಕೂ ಅನುಕರಣೀಯ ಎಂದರು. ರಾಜಶ್ರೀ ಡಾ. ಡಿ ವೀರೇಂದ್ರ ಹೆಗ್ಗಡೆಯವರ 76ನೇ ಜನ್ಮ ದಿನದ ಪ್ರಯುಕ್ತ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀನಿವಾಸ ರಾವ್ ಧರ್ಮಸ್ಥಳ ಇವರು ಹೆಗ್ಗಡೆಯವರ ಜೀವನ, ಸಾಧನೆಗಳ ಪರಿಚಯಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಅವರು ಮಾತನಾಡಿ ಖಾವಂದರ ಸಾಧನೆಗಳು ಪ್ರೇರಣೆಯಾಗಲಿ, ಸಮಾಜಮುಖಿಯಾಗಿ ಬೆಳೆಯುವ ಪ್ರವೃತ್ತಿ ಒಡಮೂಡಿಸಿಕೊಳ್ಳಿಯೆಂದು ಪೂಜ್ಯರ ಜೀವನದ ಕೆಲವು ಘಟನೆಗಳನ್ನು ಉದಾಹರಿಸಿ ವಿದ್ಯಾರ್ಥಿಗಳಿಗೆ ತಿಳಿಸಿದರು. ಗಣಕಶಾಸ್ತ್ರ ಮತ್ತು ಟೆಕ್ನೋ ಕ್ಲಬ್ ನ ಹಾಗೂ ಜೀವಶಾಸ್ತ್ರ ಮತ್ತು ಇಕೋ ಕ್ಲಬ್ ಮುಖೇನ ಕಾಲೇಜಿನಲ್ಲಿ ಆಯೋಜಿಸಿದ್ದ ಹಲವಾರು ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ವಿತರಿಸಲಾಯಿತು.

ವೇದಿಕೆಯಲ್ಲಿ ಉಪ ಪ್ರಾಂಶುಪಾಲರಾದ ಮನೀಶ್ ಕುಮಾರ್ ಉಪಸ್ಥಿತರಿದ್ದರು. ಗಣಕಶಾಸ್ತ್ರದ ಉಪನ್ಯಾಸಕರಾದ ಪವಿತ್ರಕುಮಾರ್ ವಂದಿಸಿದರು. ಕನ್ನಡ ಉಪನ್ಯಾಸಕಿ ಕವಿತಾ ಉಮೇಶ್ ನಿರೂಪಿಸಿದರು.

Leave a comment

ವ್ಯಕ್ತಿತ್ವ ವಿಕಸನ ಕಾರ್ಯಕ್ರಮ

ಕಾಲೇಜಿನಲ್ಲಿ ಕಲಿಕೆ ಜೊತೆ ಜೊತೆಗೆ ವಿದ್ಯಾರ್ಥಿಗಳ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಹಲವಾರು ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ , ಮುಂಡಾಜೆ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಪುರುಷೋತ್ತಮ ಶೆಟ್ಟಿ, ಎಸ್‌.ಡಿ.ಎಂ ಸ್ನಾತಕೋತರ ಕಾಲೇಜಿನ ಮನ:ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಅಶ್ವಿನಿ ಶೆಟ್ಟಿ ಹಾಗೂ ಸಿಂಧು ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ, ವಿದ್ಯಾರ್ಥಿಗಳಿಗೆ ‘ಭಾಷಣ ಕಲೆ’ ಹಾಗೂ ‘ಜೀವನ ಕೌಶಲ್ಯ’ದ ಕುರಿತು ಕಾರ್ಯಗಾರವನ್ನು ನಡೆಸಿಕೊಟ್ಟರು. ಉತ್ತಮ ಭಾಷಣಕಾರರಾಗಲು ಬೇಕಾದ ಹಲವಾರು ಮಾರ್ಗೋಪಾಯಗಳನ್ನು ತಿಳಿಸಿಕೊಟ್ಟರು. ಬದುಕನ್ನು ಸುಂದರಗೊಳಿಸುವ ದಾರಿಗಳ ಕುರಿತಾಗಿ ಬಹಳಷ್ಟು ಉದಾಹರಣೆಗಳ ಮೂಲಕ ವಿವರಿಸಿದರು. ವಿದ್ಯಾರ್ಥಿಗಳು ಲವಲವಿಕೆಯಿಂದ ಪಾಲ್ಗೊಂಡರು.

Leave a comment

ರಕ್ಷಕ ಶಿಕ್ಷಕ ಸಭೆ

ಸಂಸ್ಕಾರಯುತ ಯುವ ಪೀಳಿಗೆ ನಿರ್ಮಾಣದ ಕಾರ್ಯ ಶಿಕ್ಷಣ ಸಂಸ್ಥೆ, ಶಿಕ್ಷಕರು, ಹೆತ್ತವರು ಸಮನ್ವಯಗೊಂಡರೆ ಮಾತ್ರ ಸಾಧ್ಯ. ವಿದ್ಯಾರ್ಥಿಗಳಲ್ಲಿ ಜ್ಞಾನಾರ್ಜನೆಯೇ ಪ್ರಮುಖ ಹಾಗೂ ಅಂತಿಮ ಧೇಯ್ಯವಾಗಬೇಕು ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಶ್ರೀಯುತ ಸೋಮಶೇಖರ ಶೆಟ್ಟಿ ಬಿ. ಹೇಳಿದರು. ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಹೆತ್ತವರಿಗೆ ನಡೆದ ‘ಶೈಕ್ಷಣಿಕ ಮಾಹಿತಿ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಸಭೆಯಲ್ಲಿ ಉಪಸ್ಥಿತರಿದ್ದು, ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಸುನಿಲ್ ಪಂಡಿತ್ ಅವರು ಮಾತಾಡಿ ಪ್ರಾರಂಭದಲ್ಲೇ ಕಲಿಕೆಯಲ್ಲಿ ನಿಮ್ಮ ತೊಡಗಿಸಿಕೊಳ್ಳುವಿಕೆ ಪರಿಣಾಮಕಾರಿಯಾಗಿದ್ದರೆ ಕಲಿಕಾ ಪ್ರಕ್ರಿಯೆ ಸಮಸ್ಯೆ ಅನಿಸದು, ನಿರಂತರ ಶ್ರಮ ಉನ್ನತ ಮಟ್ಟಕ್ಕೆ ಕೊಂಡೊಯ್ಯುವುದರಲ್ಲಿ ಸಂಶಯವಿಲ್ಲ ಎಂದರು. ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಿಕೆಗಳ ಬಗ್ಗೆ ರಾಸಾಯನಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಚೈತ್ರ ಪ್ರಭು ಮಾಹಿತಿ ನೀಡಿದರು. ಉಪ ಪ್ರಾಂಶುಪಾಲರಾದ ಮನೀಷ್ ಕುಮಾರ್ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಒದಗಿಸುವ ಸಿಇಟಿ, ನೀಟ್ ತರಬೇತಿಗಳ ಬಗ್ಗೆ ಮಾಹಿತಿ ನೀಡಿದರು. ಭೌತಶಾಸ್ತ್ರದ ಉಪನ್ಯಾಸಕ ವಿಕ್ರಂ.ಪಿ ಮುಂಬರುವ ಸಿಇಟಿ ಹಾಗೂ ನೀಟ್ ಪರೀಕ್ಷೆಗಳ ಅವಕಾಶ ಹಾಗೂ ಸ್ಥಿತಿಗತಿಗಳ ಕುರಿತು ಮಾಹಿತಿ ನೀಡಿದರು. ಜೀವಶಾಸ್ತ್ರದ ಉಪನ್ಯಾಸಕಿ ವಾಣಿ ಎಂ. ಎ ಸ್ವಾಗತಿಸಿದರು. ಸಂಸ್ಕೃತ ಉಪನ್ಯಾಸಕರಾದ ಮಹೇಶ್ ಎಸ್.ಎಸ್ ನಿರೂಪಿಸಿ, ವಂದಿಸಿದರು.

Leave a comment