ಸಾಹಿತ್ಯದಲ್ಲಿ ಆಸಕ್ತಿ ಬೆಳೆಸುವುದರಿಂದ ನಮ್ಮ ಪ್ರತಿಭೆ ಅನಾವರಣ, ಭಾಷೆಯ ಸಾವಿರ ಪ್ರಭುತ್ವ ಬೆಳೆದು ಬದುಕಿಗೆ ಸ್ಫೂರ್ತಿ ದಏಒರೆಯುವುದು. ನಮ್ಮ ಬದುಕು ಕಟ್ಟಿಕೊಡಲು ಸಾಹಿತ್ಯ ಪ್ರೇರಣೆಯಾಗಿ ಮಾರ್ಗದರ್ಶಿಯಾಗುವುದು. ಮಾತುಗಳಿಗಿಂತ ಮೀರಿದ ಶಕ್ತಿ ಸಾಹಿತ್ಯಕ್ಕಿದೆ ಎಂದು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ. ಸುವರ್ಣ ಹೇಳಿದರು. ಉಜಿರೆಯ ಶ್ರೀ ಧ.ಮಂ. ಪಿ.ಯು. * ವಸತಿ ಕಾಲೇಜಿನಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲೂಕು ಘಟಕ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ.ಪೂ. ವಸತಿ ಕಾಲೇಜಿನ ಆಶ್ರಯದಲ್ಲಿ ಡಾ। ಟಿ.ಎನ್. ತುಳುಪುಳೆ ನೆನಪು, ದತ್ತಿ ಉಪನ್ಯಾಸ ಮತ್ತು ಸಮ್ಮಾನ ಕಾರ್ಯಕ್ರಮದಲ್ಲಿ ಸಾಹಿತ್ಯ-ಪ್ರೇರಣೆ ಎಂಬ ವಿಚಾರವಾಗಿ ಉಪನ್ಯಾಸ ನೀಡಿದರು. ಡಾ| ಎನ್.ಎಂ.ತುಳುಪುಳೆ ಮಾತನಾಡಿ, ಜೋತಿಷ, ಯಕ್ಷಗಾನ ಅರ್ಥಧಾರಿ, ಹರಿಕಥೆಗಳಲ್ಲಿ ಆಸಕ್ತಿ ಹೊಂದಿದವರು. ಅವರ ಗ್ರಂಥ ಡಾ। ಟಿ. ಎನ್.ತುಳುಪುಳೆ ಬಹುಮುಖ ಪ್ರತಿಭಾವಂತರಾಗಿ ಸಾಹಿತ್ಯ ಬದುಕಿಗೆ ಪ್ರೇರಣೆಯಾಗಲಿ ಎಂದರು. ಡಾ। ಟಿ.ಎನ್.ತುಳುಪುಳೆ ದತ್ತಿ ಉಪನ್ಯಾಸವನ್ನು ಉದ್ಘಾಟಿಸಿದ ಎಸ್ಡಿಎಂ ವಸತಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್, ಸಾಹಿತ್ಯ ಸಮಾಜದ ದರ್ಪಣ. ಸಾಹಿತ್ಯ ಬದುಕಿಗೆ ಪ್ರೇರಣೆಯಾಗಿ ಮೌಲ್ಯ ಕಟ್ಟಿಕೊಡುತ್ತದೆ. ಸಾಹಿತ್ಯದ ಅಧ್ಯಯನದಿಂದ ಜೀವನ ಮೌಲ್ಯ, ಭಾವನೆಯ ಉದ್ದೀಪನವಾಗುವುದು. ಡಾ| ಟಿ.ಎನ್.ತುಳುಪುಳೆ ಅವರು ಯಾವುದೇ ಪ್ರಶಸ್ತಿ, ಪ್ರಸಿದ್ದಿಗಾಗಿ ಸಾಹಿತ್ಯ ಸೇವೆ ಮಾಡದೆ ಸಾಹಿತ್ಯಾಸಕ್ತಿಯಿಂದ ಸದ್ದಿಲ್ಲದೇ ಸಾಹಿತ್ಯ ಸೇವೆ ಮಾಡಿದವರು. ಅವರಲ್ಲಿ ಆಗಾಧ ಸಾಹಿತ್ಯ ಭಂಡಾರವಿದ್ದು, ಸಾಹಿತ್ಯಾಸಕ್ತರು ಅದನ್ನು ಆಯ್ದು ಓದಬಹುದು ಎಂದರು. ಭಂಡಾರದಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್, ಮರಾಠಿಯ ಅಮೂಲ್ಯ ಕೃತಿಗಳ ಸಂಗ್ರಹವಿದ್ದು 6-7 ಗ್ರಂಥಲಾಯಕ್ಕೆ ಕೊಡುಗೆಯಾಗಿ ನೀಡಿದ್ದೇವೆ ಎಂದರು. ಸಾಹಿತಿ ಶ್ರೀಕರ ಭಟ್ ಮರಾಠ ಅವರನ್ನು ಗೌರವಿಸಲಾಯಿತು. ನಿವೃತ್ತ ಪ್ರಾಚಾರ್ಯ ಕೃಷ್ಣಪ್ಪ ಪೂಜಾರಿ ಉಪಸ್ಥಿತರಿದ್ದರು. ಕ.ಸಾ.ಪ.ತಾಲೂಕು ಘಟಕ ಅಧ್ಯಕ್ಷ ಡಿ.ಯದುಪತಿ ಗೌಡ ಸ್ವಾಗತಿಸಿ, ಕ.ಸಾ.ಪ. ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು ವಂದಿಸಿದರು. ಉಪನ್ಯಾಸಕ ಮಹೇಶ್ ಎಸ್. ಎಸ್. ನಿರೂಪಿಸಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕ.ಸಾ.ಪ. ಅಧ್ಯಕ್ಷಡಾ| ಎಂ.ಪಿ.ಶ್ರೀನಾಥ್ ಮಾತನಾಡಿ, ವಿದ್ಯಾರ್ಥಿಗಳಿಗೆ ಸ್ಫೂರ್ತಿ ಹಾಗೂ ಪ್ರೇರಣೆಯಾಗಬೇಕೆಂಬ ಉದ್ದೇಶದಿಂದ ದತ್ತಿ ಉಪನ್ಯಾಸಗಳನ್ನು ಕಾಲೇಜುಗಳಲ್ಲಿ ನಡೆಸಲಾಗುತ್ತಿದೆ ಎಂದರು.

