77ನೇ ಸ್ವಾತಂತ್ರ ದಿನಾಚರಣೆಯನ್ನು ದಿಶಾ ಸಮೂಹ ಸಂಸ್ಥೆಯ ಮಾಲಿಕರಾದ ರೋಟೆರಿಯನ್ ಅರುಣ್ ಕುಮಾರ್ ಧ್ವಜಾರೋಹಣದ ಮೂಲಕ ಧ್ವಜ ವಂದನೆ ನೆರವೇರಿಸಿದರು. ದೇಶದ ಹೆಮ್ಮೆಯ ಪ್ರತೀಕವಾದ ರಾಷ್ಟಗೀತೆಯನ್ನು ಹಾಡಿದರು. ಬ್ರಿಟಿಷರಿಂದ ದೇಶವನ್ನು ಬಂಧಮುಕ್ತಗೊಳಿಸಲು ಹೋರಾಟ ಮಾಡಿ ಮಡಿದ ವೀರರ ಸ್ಮರಣೆಯೊಂದಿಗೆ ಭಾರತ ಮಾತೆಯ ಮಡಿಲ ಮಕ್ಕಳಾದ ನಾವೆಲ್ಲರೂ ಒಗ್ಗಟ್ಟಿನಿಂದ ಬಾಳಿ ಬದುಕುವ,ದೇಶದ ಸಂಸ್ಕೃತಿ, ನಂಬಿಕೆಗಳನ್ನು ಎಂದೂ ಹುಸಿಗೊಳಿಸದೆ ಉತ್ತಮ ಆರೋಗ್ಯವಂತ ನಾಗರೀಕರಾಗೋಣವೆಂಬ ಸಂದೇಶ ನೀಡಿದರು.
ಪ್ರಾಂಶುಪಾಲರಾದ ಸುನಿಲ್ ಪಂಡಿತ್, ಉಪ ಪ್ರಾಂಶುಪಾಲರಾದ ಮನೀಷ್ ಕುಮಾರ್ ,ವಿದ್ಯಾರ್ಥಿಗಳು,ಉಪನ್ಯಾಸಕರು, ಕಾಲೇಜಿನ ವಾರ್ಡನ್ಗಳು, ಸಿಬ್ಬಂದಿ ವರ್ಗ ಎಲ್ಲರೂ ಉಪಸ್ಥಿತರಿದ್ದರು. ಧ್ವಜಾರೋಹಣ ಪ್ರಕ್ರಿಯೆಯಲ್ಲಿ ದೈಹಿಕ ಶಿಕ್ಷಕ ಲಕ್ಷ್ಮಣ್ ಜಿ. ಡಿ. ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿ ಉಜ್ವಲ್ ಎನ್ ಜಿಂಗಾಡೆ ಸಹಕರಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಸಿಹಿ ಹಂಚಲಾಯಿತು.

