Skip to content Skip to footer

ಶ್ರೀ ರಾಮ ಪದವಿ ಪೂರ್ವ ಕಾಲೇಜು ಕಲ್ಲಡ್ಕ ಇಲ್ಲಿ ಪದವಿ ಪೂರ್ವ ಕಾಲೇಜುಗಳ ‘ಜಿಲ್ಲಾ ಮಟ್ಟ’ದ ಯೋಗಾಸನ ಸ್ಪರ್ಧೆ ನಡೆಯಿತು. ವಿದ್ಯಾರ್ಥಿಗಳಾದ ನಂದೀಶ್ ಎಸ್. ಎಸ್., ಭರತ್ ಕುಮಾರ್, ಅರ್ಜುನ್ ಎಸ್. ಎನ್., ಕೌಸ್ತುಭ, ಚೇತನ್ ಕಾಲೇಜನ್ನು ಪ್ರತಿನಿಧಿಸಿ ರನ್ನರ್ ಟ್ರೋಫಿ ತಮ್ಮದಾಗಿಸಿಕೊಂಡರೆ, ವಿದ್ಯಾರ್ಥಿ ಅರ್ಜುನ್ ಎಸ್. ಎನ್. ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡನು. ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ದೈಹಿಕ ಶಿಕ್ಷಕರಾದ ಲಕ್ಷ್ಮಣ್ ಜಿ. ಡಿ. ಹಾಗೂ ಸಂಸ್ಥೆಯ ಈಜು ತರಬೇತುದಾರಾದ ಶ್ರೀಯುತ ಸೀನಪ್ಪರವರು ಶ್ರಮಿಸಿದ್ದರು.ಸಹಾಯಕ ವಾರ್ಡನ್ ಆಗಿರುವ ಮನೋಜ್ ವಿದ್ಯಾರ್ಥಿಗಳ ಜೊತೆಗಿದ್ದು ಸಹಕರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಹಾಗೂ ಸಿಬ್ಬಂದಿವರ್ಗ ವಿದ್ಯಾರ್ಥಿಗಳ ಸಾಧನೆಯನ್ನು ಪ್ರಶಂಸಿದರು.